ಯಾಕಿದರ ಮೋಹ

ಮಗುವಾಗಿ ಇರುವಾಗ
ನೀನು
ಎಲ್ಲರ ಮುಖದ ನಗುವಾಗಿದ್ದಿ
ಮನಸಿಗೆ ಹಿತ
ಬದುಕಿಗೆ ಮಿತವಾಗಿ
ದೇವರ ದಯೆಯಾಗಿ
ಮುದ್ದಾದ
ಬಾಲಭಾವದ ಚೆಲುವಿನ ಖಣಿಯಾಗಿ
ಸುಖ-ಶಾಂತಿಯ ಮಡುವಾಗಿದ್ದಿ
ಯವ್ವನ ಬರುತಿರಲು ನೀನು ನಿನ್ನ
ಮೈಯ ಮಾಟಕೆ ಕಣ್ಣ ನೋಟಕೆ
ಹಮ್ಮಿನಧಿಕಾರಿಯಾದಿ
ಮೀರುವೆದೆಯು ಮೀರಿಸಿತು
ನಿನ್ನ ಭಾವ-ಬುದ್ದಿಯನು
ದೇಹಬಲದಿಂದ
ಲೋಕಗೆಲ್ಲುವೆನೆಂಬ
ಆತ್ಮವಿಶ್ವಾಸದ ಮಡು ತುಂಬಿ ಹರಿಯಿತು
ನೀನು ನಿನ್ನ ಚೆಲುವಿಗೆ
ಒಣ ಅಭಿಮಾನಿಯಾದೆ.
ಈಗೇಕೆ ಮರುಗುವೆ ಮರುಳೆ
ಮುಪ್ಪಿನ ಯೋಚನೆಗೆ ಯೋಜನೆಗೆ
ಹೌಹಾರಿ, ಹೆದರಿ
ಕನ್ನಡಿಯೆದುರಿಗೆ ನಿಂತು
ನರೆಕೂದಲನು ಹೆಕ್ಕುತ್ತ
ಹಣೆಯ, ಕಣ್ಣ ಸುತ್ತ ಹಬ್ಬಿರುವ
ಸುಕ್ಕನು ಕಂಡು
ಅಳಿದ ಮೈಕಟ್ಟು
ಜೋಲು ರಟ್ಟೆಯನು ಮುಟ್ಟಿ ಮುಟ್ಟಿ
‘ಅಯ್ಯಾ ಮುಪ್ಪೇ’ ಎಂದು
ನಿಡಿದುಸಿರು ಬಿಡುವೆಯೇಕೆ?
ಎಂದೊ ಒಂದು ದಿನ
ಅಳಿಯುವ, ಮುಳಿಯುವ
ಈ ಸೊತ್ತಿನ ಮೋಹವೇತಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕಚಿತ್ತ ರೂಪ
Next post ಆರೊ ದುಡಿದರೆ ಇನ್ನಾರಿಗೋ ಆರೋಗ್ಯ ಸಿಕ್ಕೀತೇ?

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys